»»
ಬೂಬಣ್ಣ: ಮೂರ್ಖತನದ ಪರಮಾವಧಿ ಯಾವುದು?
ರಾಮಣ್ಣ: ಹಂ... ನಿನ್ನ ಭಾವಚಿತ್ರ ನೋಡು,
ತಿಳಿಯುತ್ತೆ!
»»
ಸಂತ: ದೇವರೆಲ್ಲಿರುವನು?....
ಚಿಕ್ಕ ಬೂಬಣ್ಣ: ನಮ್ಮ ಶೌಚಾಲಯದಲ್ಲಿ, ಸ್ವಾಮಿ!
ಸಂತ: ಅಯ್ಯಯ್ಯೋ! ಯಾರದು? ಯಾರಂದರು?
ಚಿಕ್ಕ ಬೂಬಣ್ಣ: ನಾನಂದೆ, ಸ್ವಾಮೀ! ನಮ್ಮಪ್ಪ
ದಿನಾ ಬೆಳಿಗ್ಗೆ ಶೌಚಾಲಯದ ಹೋರಗೆ ನಿಂತು ಬೊಬ್ಬಿಡುತ್ತಾರೆ, "ಓ ದೇವರೇ!
ನೀನಿನ್ನೂ ಇಲ್ಲಿದ್ದೀಯಾ.."
»»
ಬೂಬಣ್ಣ: ನಾನೊಬ್ಬಳನ್ನು ಪ್ರೀತಿಸುತಿರುವೆ.
ಅವಳಿಗದನ್ನು ತಿಳಿಸಲು ಸೂಕ್ತವಾದ ಜಾಗ ಯಾವುದು?
ರಾಮಣ್ಣ: ದೇವಸ್ತಾನದ ಒಳಗೆ..
ಬೂಬಣ್ಣ: ದೇವಸ್ತಾನದೊಳಗೇ?! ಯಾಕೆ..
ರಾಮಣ್ಣ: ಯಾಕೆಂದರೆ, ಅಲ್ಲಿ ಅವಳು ಯಾವುದೇ
ಚಪ್ಪಲಿ, ಪಾದರಕ್ಷೆಯನ್ನು ಹಾಕಿಕೊಂಡಿರುವುದಿಲ್ಲ..
»» ಬೂಬಣ್ಣ
ಹೊಸಾ ಮೋಟಾರ್ ಬೈಕು ಕೊಂಡಾಗ ರಾಮಣ್ಣನನ್ನು ತಿರುಗಾಡಲೆಂದು ಅದರಲ್ಲಿ
ಕರೆದೊಯ್ಯುತ್ತಾನೆ...
ರಾಮಣ್ಣ(ಬೊಬ್ಬಿಡುತ್ತಾ): ಓ ಮೂರ್ಖ! ಇಷ್ಟು
ವೇಗವಾಗಿ ಯಾಕೆ ಗಾಡಿ ಓಡಿಸುತ್ತಿದ್ದೀ?! ನಮ್ಮಿಬ್ಬರ ತಿಥಿ ಮಾಡಿಸಲಾ?! ನನಗೆ
ಭಯವಾಗ್ತಾ ಇದೆ!
ಬೂಬಣ್ಣ: ಯಾಕೆ ಬೊಬ್ಬೆ ಹಾಕ್ತಾ ಇದ್ದೀ?!
ಭಯವಾದ್ರೆ ನನ್ನ ಹಾಗೆ ಕಣ್ಣು ಮುಚ್ಚಿಕೋ..
»» ಬೂಬಣ್ಣ
ಒಂದು ಕಾರು ಕೊಂಡಾಗ ತನ್ನ ಮಿತ್ರರನ್ನು ಅದರಲ್ಲಿ ತಿರುಗಾಡಲು ಕರೆದೊಯ್ಯುತ್ತಾನೆ..
ಅದರಲ್ಲಿ ತಿರುಗಾಡಿ ಹಿಂತಿರುಗಿದ ಮೇಲೆ...
ಬೂಬಣ್ಣ: ಹೇಗಿತ್ತು? ನನ್ನ ಕಾರು!!
ಭೀಮಣ್ಣ ಹಾಗೂ ಚೋಮಣ್ಣ: ಭಲೇ! ಭಲೇ! ಇಂತಹಾ ಕಾರು
ಜಗತ್ತಿನಲ್ಲಿ ಇನ್ನೊಂದಿಲ್ಲ......
ಬೂಬಣ್ಣ: ಅದೇ, ನನ್ನ ಕಾರಿನ ವಿಶೇಷತೆ!
ರಾಮಣ್ಣ: ಹೌದಪ್ಪಾ! ಅದನ್ನೇ ಅವರೂ
ಹೇಳಲಿಕ್ಕಿದ್ರು... ತನ್ನ ಹಾರ್ನ್ ಬಿಟ್ಟು ಬೇರೆಲ್ಲಾ ಭಾಗಗಳೂ ಸದ್ದು ಮಾಡುವ ಕಾರು
ಜಗತ್ತಿನಲ್ಲಿ ಇದೊಂದೇ....
»»
ಆಧ್ಯಾಪಕಿ: ಬೂಬಣ್ಣ, ಕಾಕತಾಳೀಯತೆಗೊಂದು ಉದಾಹರಣೆ ಕೊಡು..
ಚಿಕ್ಕ ಬೂಬಣ್ಣ: ನನ್ನ ಅಪ್ಪ, ಅಮ್ಮ ಇಬ್ಬರೂ
ಒಂದೇ ದಿನ ಮದುವೆಯಾದರು..
»»
ಬೂಬಣ್ಣನ ಅಪ್ಪ: ನಿನಗೇನನ್ನೂ ಕಲಿಸಲು
ಅಸಾಧ್ಯವೆಂದು ನಿನ್ನ ಅಧ್ಯಾಪಕಿಯು ಹೇಳುತ್ತಾಳೆ!
ಚಿಕ್ಕ ಬೂಬಣ್ಣ: ಅದಕ್ಕೇ ನಾನು ಯವಾಗಲೂ ಹೇಳೋದು,
ಅವಳು ಯಾವುದೇ ಪ್ರಯೋಜನಕ್ಕಿಲ್ಲದ ಅಧ್ಯಾಪಕಿಯೆಂದು!
»»
ಚಿಕ್ಕ ಬೂಬಣ್ಣ: ಅಪ್ಪಾ, ಇವತ್ತು ಅಧ್ಯಾಪಕಿಯು,
ಮುಂದೆ ನಿನ್ನ ಯಾವುದಾದರೂ ತಮ್ಮ, ತಂಗಿಯವರು ಶಾಲೆಗೆ ಬರಲಿರುವರೇ ಎಂದು ಕೇಳಿದ್ರು..
ಬೂಬಣ್ಣನ ಅಪ್ಪ: ಓಹ್! ಓಳ್ಳೆಯ
ಅಧ್ಯಾಪಕಿಯರು. ನೀನು ನಮ್ಮೊಬ್ಬನೇ ಮಗುವೆಂದು ತಿಳಿದಾಗ ಏನಂದರು?
ಚಿಕ್ಕ ಬೂಬಣ್ಣ: ಹೆಚ್ಚೇನೂ ಇಲ್ಲಾ.. 'ಅಬ್ಬಾ!
ಬಚಾವಾದೆ!', ಎಂದರು.. ಅಷ್ಟೇ..
»»
ಒಮ್ಮೆ ಬೂಬಣ್ಣ ಹಾಗೂ ಮಿತ್ರರು ಪ್ರವಾಸಕ್ಕೆ ಹೋದಾಗ ಮೈಸೂರು ಅರಮನೆಗೆ ಭೇಟಿ
ಕೊಟ್ಟರು.. ಬೂಬಣ್ಣನಿಗೆ ಬಹಳ ಸುಸ್ತಾಗಿತ್ತು ಎಂದು ಒಂದು ಕಡೆ ಅರಾಮಿಸಲು ಕುಳಿತನು..
ಕಾವಲುಗಾರ: ಓಯ್! ಟಿಪ್ಪು ಸುಲ್ತಾನನ ಸಿಂಹಾಸನದ
ಮೇಲೆ ಯಾಕೆ ಕುಳಿತಿದ್ದೀ?! ಕೂಡಲೇ ಕೆಳಗೆ ಇಳಿ!
ಬೂಬಣ್ಣ: ಆಯ್ತಪ್ಪಾ! ಯಾಕೆ ಹಾಗೆ ಕಿರುಚುತ್ತಾ
ಇದ್ದೀ? ಅವನು ಬಂದಾಗ ಇಳಿಯುತ್ತೇನೆ. ನನಗೆ ಭಾರೀ ಸುಸ್ತಾಗಿದೆ, ಹೋಗಿ ಬೇರೆ
ಯಾರದಾದ್ರೂ ತಲೇ ತಿನ್ನು...
»»
ರಾಮಣ್ಣ: ಹೇ.. ಕೊಡೆಯಲ್ಲಿ ತೂತು ಯಾಕೆ ಮಾಡಿದೆ?!
ಬೂಬಣ್ಣ: ಅಯ್ಯೋ ಮೂರ್ಖಾ! ಮತ್ತೆ ಮಳೆ ನಿಂತು
ಹೋದರೆ ನಂಗೆ ಹೇಗೆ ಗೊತ್ತಗುತ್ತೆ?
»»
ಒಮ್ಮೆ ಬೂಬಣ್ಣ ಟೆಂಪೋ ಓಡಿಸುವಾಗ, ಅಪಘಾತವಾಗುತ್ತದೆ..
ಆರಕ್ಷಕ (ಪೋಲೀಸ್): ಏಯ್! ಈ ಅಪಘಾತ ಹೇಗಾಯಿತು?
ಇದಕ್ಕೆ ಕಾರಣ ಯಾರು?
ಬೂಬಣ್ಣ: ಗೊತ್ತಿಲ್ಲ ಸ್ವಾಮಿ! ಆಗ ನಾನು ಒಳ್ಳೇ
ನಿದ್ರೆಯಲ್ಲಿದ್ದೆ..
»» ಅಂದು ಬೂಬಣ್ಣ ಮೊದಲ ಸಲ ವಿಮಾನ
ಏರಿದ್ದನು.. ಆದ್ರೆ, ವಿಮಾನ ಪ್ರಯಾಣದ ಬಗ್ಗೆ ಅದರಲ್ಲಿ ಮೊದಲೇ ಪ್ರಯಾಣ ಮಾಡಿದವರ
ಬಳಿ ಕೇಳಿ ತಿಳಿದುಕೊಂಡಿದ್ದನು..
ಬೂಬಣ್ಣ: ವಾಹ್! ಅವರೆಲ್ಲಾ ಹೇಳಿದ್ದು ನಿಜ!
ಇಲ್ಲಿಂದ ಜನರು ನಿಜಕ್ಕೂ ಇರುವೆಗಳ ಹಾಗೆ ಕಾಣಿಸುತ್ತಿದ್ದಾರೆ...
ಗಗನ ಸಖಿ(air hostess): ಸಾರ್! ಅವುಗಳು
ನಿಜವಾದ ಇರುವೆಗಳೇ! ವಿಮಾನ ಇನ್ನೂ ಹಾರಲು ಪ್ರಾರಂಭಿಸಿಲ್ಲ...
»Disclaimer